ಬೆಂಗಳೂರು ಜಿಲ್ಲೆಯ ಆನೇಕಲ್   ತಾಲ್ಲೂಕಿನಲ್ಲಿರುವ ಮುತ್ಯಾಲಮಡುವು, ಆನೇಕಲ್ ನಿಂದ ೫ ಕಿ.ಮೀ ಹಾಗು ಬೆಂಗಳೂರಿನಿಂದ  ೪೦  ಕಿ.ಮೀ. ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು   ಪ್ರಸಿದ್ದ ಪ್ರವಾಸಿ ತಾಣವಾಗಿದೆ.
ಮುತ್ಯಾಲಮಡುವಿನ ಹೆಸರು, ತೆಲುಗು   ಭಾಷೆಯ ಮುತ್ಯಾಲ - ಮುತ್ತುಗಳು (Pearl) ಹಾಗು ಮಡುವು - ಮಡು (Valley) ಪದಗಳಿಂದ  ಉಗಮ  ವಾಗಿದೆ. ಇಲ್ಲಿಯ ಜಲಪಾತದಲ್ಲಿ ನೀರು ಮುತ್ತಿನ ಹನಿಗಳಂತೆ, ಮಡುವಿನೊಳಗೆ   ಧುಮುಕುವುದರಿಂದ, ಈ ಹೆಸರು ಬಂದಿದೆ.
ಬೆಂಗಳೂರಿನಿಂದ ೪೫ ಕಿ.ಮೀ ಇರುವ ಇಲ್ಲಿ ನೀರಿನ ಝರಿ ಸುಮಾರು 90 ಮೀ ಎತ್ತರದಿಂದ ಬೀಳುವಾಗ ಮುತ್ತಿನ ಹನಿಗಳಂತೆ  ಕಾಣುತ್ತವೆ. ಆದ್ದರಿಂದ ಹೆಸರು 'ಮುತ್ಯಾಲ ಮಡುವು'  (pearl valley).
ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸರವಾದಾಗ 'ಒಮ್ಮೆ' ಹೋಗಿ ಬರಬಹುದಾದಂತಹ  ಸುಂದರ ಸ್ಥಳ. ವಾರಾಂತ್ಯಗಳಲ್ಲಿ ಹೋಗಬಯಸಿದರೆ ಬೆಳಿಗ್ಗೆ 8, 9 ಗಂಟೆ ಸುಮಾರಿಗೆ ಅಲ್ಲಿದ್ದರೆ ನೀವು  ಝರಿಯ ನಾದ, ಹಕ್ಕಿಗಳ ಕಲರವ ಕೇಳಿ  ಪ್ರಕೃತಿಯ ಶಾಂತತೆ ಸವಿಯಬಹುದು. ಮಳೆಗಾಲವಾದರೆ ಸೂಕ್ತ. ಇಲ್ಲವಾದಲ್ಲಿ ಮತ್ತೆ ಅದೇ ಜನರ ಗಲಾಟೆ ಗೌಜು!.
ಹಾಗೆ ಊಟ ವಸತಿಗೆ ಮಯೂರ ನಿಸರ್ಗ ಹೋಟೆಲ್ ( ಕರ್ನಾಟಕ ಪ್ರವಾಸೋದ್ಯಮ ಇಲಾಖೆ) ಯ ಸೌಲಭ್ಯವಿದೆ.
ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಬಸ್ ಸೌಕರ್ಯ ಆನೇಕಲ್ ಮಾತ್ರ ಲಭ್ಯವಿದೆ. ಇಲ್ಲಿಂದ ಆಟೋ ಮುಖಾಂತರ ಸುಮಾರು 5 ಕಿ.ಮೀ ಗಳ ಪ್ರಯಾಣ.
ಬೆಂಗಳೂರಿನಿಂದ ಮಾರ್ಗ.
ಬನ್ನೇರುಘಟ್ಟ ರಸ್ತೆ ----> ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ----> ಆನೇಕಲ್ ----> ಮುತ್ಯಾಲ ಮಡುವು.
ಅಥವಾ
ಹೊಸೂರು ರಸ್ತೆ---------> ಚಂದಾಪುರ ----> ಆನೇಕಲ್ ----> ಮುತ್ಯಾಲ ಮಡುವು .
No comments:
Post a Comment